ಡಾ. ಎಸ್. ಆರ್. ರಾವ್ ಎಂದೇ ಕರೆಯಲ್ಪಡುತ್ತಿದ್ದ, ಡಾ. ಶಿಕಾರಿಪುರ ರಂಗನಾಥ ರಾವ್ (೧೯೨೨-೨೦೧೩) ಭಾರತದ ಪುರಾತತ್ವ ತಜ್ಞರಾಗಿ ಸಿಂಧೂತಟದ ನಾಗರೀಕತೆಗೆ, ಅದರಲ್ಲೂ ಹರಪ್ಪಗೆ ಸಂಬಂಧಿಸಿದ ಉತ್ಖನನಗಳನ್ನು ನೆಡೆಸಿದ ಹಲವಾರು ತಂಡಗಳನ್ನು ಮುನ್ನೆಡಿಸಿದ್ದರು, ಇದರಲ್ಲಿ ಗುಜರಾತ್‌ನ ಕೋಟೆಗಳ ನಗರ ಲೋಥಾಲ್ ಕೂಡ ಸೇರಿದೆ. ಇವರು ಶ್ರೀಕೃಷ್ಣ ನೆಲೆಯಾಗಿದ್ದ ಐತಿಹಾಸಿಕ ನಗರದ್ವಾರಕಾದ ಇರುವಿಕೆಯನ್ನೂ ಪತ್ತೆ ಹಚ್ಚಿದ್ದರು. == ಜೀವನಚರಿತ್ರೆ ಮತ್ತು ವೃತ್ತಿ ಜೀವನ == ಶಿಕಾರಿಪುರ ರಂಗನಾಥ ರಾವ್ ಮೈಸೂರು ವಿಶ್ವವಿದ್ಯಾಲಯದಿಂದ ತನ್ನ ಶಿಕ್ಷಣವನ್ನು ಮುಗಿಸಿದರು. ಅವರು ಬರೋಡಾ ರಾಜ್ಯದ ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿದರು. ನಂತರ ಭಾರತದ ಪುರಾತತ್ವ ಇಲಾಖೆಯಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಡಾ ರಾವ್ ಅವರು ರಂಗ್ಪುರ್, ಆಮ್ರೇಲಿ , ಭಗತ್ರವ್, ದ್ವಾರಕಾ, ಹನೂರ್, ಐಹೊಳೆ, ಕಾವೇರಿಪಟ್ಟಣಂ ಮತ್ತು ಇತರ ಅನೇಕ ಪ್ರಮುಖ ಪ್ರದೇಶಗಳ ಉತ್ಖನನಗಳ ನಾಯಕತ್ವ ವಹಿಸಿದ್ದಾರೆ. ಸಂಶೋಧನೆ ಮತ್ತು ಉತ್ಖನನಗಳು ಇತಿಹಾಸದಲ್ಲಿ ತಿಳಿವಿಗೆ ಬಂದಂಥ ಅತ್ಯಂತ ಪ್ರಾಚೀನ ಬಂದರು ಮತ್ತು ಭಾರತದ ಪ್ರಮುಖ ಸಿಂಧೂ ಕಣಿವೆಯ ಸಂಸ್ಕೃತಿಯ ಅತ್ಯಂತ ಪ್ರಮುಖ ತಾಣವಾದ ಲೋಥಾಲ್ ನಲ್ಲಿ ಸಂಶೋಧನೆ ಮತ್ತು ಉತ್ಖನನಗಳ ನಿರ್ದೇಶನ ಅವರ ಪ್ರಮುಖ ಕೃತಿಗಳಲ್ಲಿ ಒಂದಾಗಿದೆ. ಡಾ ರಾವ್ ಅವರು ಜವಹರಲಾಲ್ ನೆಹರೂ ಫೆಲೋಶಿಪ್ ಪುರಸ್ಕೃತರಾಗಿದ್ದಾರೆ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ರಾವ್ ಅವರು ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿನ ಅನೇಕ ಐತಿಹಾಸಿಕ ತಾಣಗಳ ಉತ್ಖನನದ ಮೇಲ್ವಿಚಾರಣೆ ಮಾಡಿದ್ದಾರೆ. ಅವರು ತಾಜಮಹಲ್ ಮತ್ತು ಕೋಟೆಗಳಂತಹ ಸ್ಮಾರಕಗಳ ಸಂರಕ್ಷಣೆಯಲ್ಲೂ ತೊಡಗಿಕೊಂಡಿದ್ದವರು. ಅಧಿಕೃತವಾಗಿ ೧೯೮೦ ರಲ್ಲಿ ನಿವೃತ್ತಿ ಹೊಂದಿದರೂ ಕೂಡ , ಡಾ ರಾವ್ ಅವರನ್ನು ಪ್ರಮುಖ ಭಾರತೀಯ ಪುರಾತತ್ವ ಯೋಜನೆಗಳಲ್ಲಿ ಎಎಸ್ಐ ನಿರ್ದೇಶಕ ಜನರಲ್ ರವರಿಗಾಗಿ ಕೆಲಸ ಮಾಡಲು ಕೋರಿಕೊಳ್ಳಲಾಯಿತು. ಡಾ ರಾವ್ ಅವರಿಂದಾಗಿಯೇ ಸಂಸ್ಥೆಯು ನಿರ್ದೇಶಕ ಡಾ ಎಸ್ ಝಹರುಲ್ ಕಾಸಿಂರ ಉಸ್ತುವಾರಿಯ ಕೆಳಗೆ ೧೯೮೧ ರಲ್ಲಿ ಭಾರತದಲ್ಲಿ ಸಮುದ್ರ ಪುರಾತತ್ವ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿತು. ಇದು ನಂತರ ವಿಶ್ವ ಮಾನ್ಯತೆ ಪಡೆದ ಸಂಸ್ಥೆಯಾಗಿ ಬೆಳೆಯಿತು . ರಾವ್ ಅವರು ಹಲವಾರು ದಶಕಗಳಿಂದ ಭಾರತೀಯ ಪುರಾತತ್ವ ಮುಂಚೂಣಿಯಲ್ಲಿದ್ದಾರೆ. ಅವರು ಸಿಂಧೂತಟದ ನಾಗರೀಕತೆಯ ತಾಣಗಳಿಂದ ಹಿಡಿದು ಕುರುಕ್ಷೇತ್ರ ಯುದ್ಧಕ್ಕೆ ಸಂಬಂಧಿಸಿದ ಉತ್ಖನನಗಳವರೆಗೆ ಭಾರತದ ಪ್ರಾಚೀನ ಇತಿಹಾಸದ ಬಗೆಗಿನ ವ್ಯಾಪಕ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ. === ಸಿಂಧೂಲಿಪಿಯನ್ನು ಬಿಡಿಸಿದ್ದು === ರಾವ್ ಅವರು ೧೯೯೨ರಲ್ಲಿ ಸಿಂಧೂಲಿಪಿಯನ್ನು ಅರ್ಥೈಸಿದುದಾಗಿ ಘೋಷಿಸಿದರು. ಇವರ ವಿಧಾನವನ್ನು ಇತರ ತಜ್ಞರು ಒಪ್ಪಿರುವರಾದರೂ ಇವರ ಪರಿಹಾರವನ್ನು ಒಪ್ಪಿಲ್ಲವಾದ ಕಾರಣ ಸಿಂಧೂಲಿಪಿಯು ಇನ್ನೂ ಬಿಡಿಸದ ಲಿಪಿಯಾಗಿ ಮುಂದುವರೆದಿದೆ. === ಶ್ರೀಕೃಷ್ಣನ ದ್ವಾರಕೆಯ ಶೋಧ === ದ್ವಾರಕೆಯ ಹತ್ತಿರದ ಕುಶಸ್ಥಲಿ ಎಂಬ ಸ್ಥಳದಲ್ಲಿ ರಾವ್ ಮತ್ತು ಅವರ ತಂಡವು ಸಮುದ್ರದ ದಂಡೆಯಿಂದಲೇ ಕಾಣುವ ೫೬೦ ಮೀಟರ್ ಉದ್ದದ ಗೋಡೆಯನ್ನು ಕಂಡರು. ಅಲ್ಲಿ ಸಿಕ್ಕ ಮಡಿಕೆಯ ಕಾಲನಿರ್ಣಯದಿಂದ ಅದು ಕ್ರಿ.ಪೂ. ೧೫೨೮ರದೆಂದು ತಿಳಿದುಬಂದಿತು. ಅಲ್ಲಿ ಒಂದು ಮುದ್ರೆಯೂ ಸಿಕ್ಕಿತು. ದ್ವಾರಕೆಯ ನೀರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದ ಮೂರು ರಂಧ್ರವಿರುವ ತ್ರಿಕೋನಾಕಾರದ ಕಲ್ಲಿನ ಲಂಗರುಗಳು ಲೋಥಾಲ್ ಮತ್ತು ಮೊಹೆಂಜೋದಾರೋಗಳಲ್ಲಿ ಸಿಕ್ಕ ಒಂದು ಒಂದು ರಂಧ್ರವನ್ನು ಹೊಂದಿದ್ದ ನಿರ್ವಾಹಕರು ಲಂಗರುಗಳ ವಿಕಸನದಲ್ಲಿ ಮುಂದುವರಿಕೆಯನ್ನು ತೋರಿಸುತ್ತವೆ ಎಂದು ಅವರು ಪ್ರತಿಪಾದಿಸಿದರು ರಾವ್ ಅವರು ಬೆಳಕಿಗೆ ಬಂದ ದ್ವಾರಕೆಯ ಅವಶೇಷಗಳು, ವಿಷ್ಣುವಿನ ಎಂಟನೇ ಅವತಾರ ಕೃಷ್ಣನ ನೆಲೆಯಾದ ಐತಿಹಾಸಿಕ ದ್ವಾರಕಾನಗರ ಎಂದು ಪ್ರತಿಪಾದಿಸಿದರು. == ಪ್ರಕಟಣೆಗಳು == , : , 0-210-22278-6 (1973) : (1955 - 1962), . , , .78, , : B0006E4EAC (1979 1985) , : , (1985) , 81-85179-74-3, : (1991) : .. ' 70th , .. .. , 2 . (1992) , : , 81-7154-689-7 (1994) , , 81-86471-48-0 (1999) , : , 81-230-0785- (2001) == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಎಸ್ಆರ್ ರಾವ್ ನೆನಪು : ಜುಲೈ 1974ರ ಒಂದು ಭಾನುವಾರ . . 2010-08-11 ವೇಬ್ಯಾಕ್ ಮೆಷಿನ್ ನಲ್ಲಿ. 2013-01-03 ವೇಬ್ಯಾಕ್ ಮೆಷಿನ್ ನಲ್ಲಿ. . 2016-03-10 ವೇಬ್ಯಾಕ್ ಮೆಷಿನ್ ನಲ್ಲಿ. 20 , 2006 - . . 2006-09-11 ವೇಬ್ಯಾಕ್ ಮೆಷಿನ್ ನಲ್ಲಿ. ' - .. . ..' (mp3) ' .